Thursday, December 8, 2016

ನಾ ಕಟ್ಟುವ ಕವಿತೆ

ಕಟ್ಟಬೇಕೊಂದು ಕವಿತೆಯ
ಜೀತದಾಳ ಮೈಮೇಲಿನ
ಬಾಸುಂಡೆಗಳ ತಂದು
ಅಸಹಾಯಕ ಹೆಣ್ಣುಗಳ
ಕಣ್ಣೀರ ಮುತ್ತುಗಳ ತಂದು
ಬಡವ ಸವೆಸಿದ
ಮೂಳೆಗಳ ತಂದು

ನಾ ಕಟ್ಟಿದ ಕವಿತೆ
ಉಳ್ಳವರ ಕತ್ತಿಗೆ
ಉರುಳಾಗಬೇಕು
ಕಾಳಧನಿಕರ ಕಾಲಿಗೆ
ಸರಪಳಿಯಾಗಬೇಕು
ದರ್ಪತೋರ್ವನಿಗೆ
ದಂಡಿಸಲೆಬೇಕು

ನೊಂದವರಲ್ಲಿ
ನಿಟ್ಟುಸಿರ ತರಬೇಕು
ಹೆಂಗೆಳೆಯರಲ್ಲಿ  
ಮಂದಹಾಸ ಬಿರಿಸಬೇಕು
ಕಾಲಾದ ನನ್ನವರಿಗೆ
ಚಿರಶಾಂತಿ ಕೊಡಿಸಲುಬೇಕು


                                  --ಕವಿತಾ ಗೇೂಪಿಕುಂಟೆ

No comments:

Post a Comment

Note: Only a member of this blog may post a comment.