ಕಟ್ಟಬೇಕೊಂದು ಕವಿತೆಯ
ಜೀತದಾಳ ಮೈಮೇಲಿನ
ಬಾಸುಂಡೆಗಳ ತಂದು
ಅಸಹಾಯಕ ಹೆಣ್ಣುಗಳ
ಕಣ್ಣೀರ ಮುತ್ತುಗಳ ತಂದು
ಬಡವ ಸವೆಸಿದ
ಮೂಳೆಗಳ ತಂದು
ನಾ ಕಟ್ಟಿದ ಕವಿತೆ
ಉಳ್ಳವರ ಕತ್ತಿಗೆ
ಉರುಳಾಗಬೇಕು
ಕಾಳಧನಿಕರ ಕಾಲಿಗೆ
ಸರಪಳಿಯಾಗಬೇಕು
ದರ್ಪತೋರ್ವನಿಗೆ
ದಂಡಿಸಲೆಬೇಕು
ನೊಂದವರಲ್ಲಿ
ನಿಟ್ಟುಸಿರ ತರಬೇಕು
ಹೆಂಗೆಳೆಯರಲ್ಲಿ
ಮಂದಹಾಸ ಬಿರಿಸಬೇಕು
ಕಾಲಾದ ನನ್ನವರಿಗೆ
ಚಿರಶಾಂತಿ ಕೊಡಿಸಲುಬೇಕು
--ಕವಿತಾ ಗೇೂಪಿಕುಂಟೆ
ಜೀತದಾಳ ಮೈಮೇಲಿನ
ಬಾಸುಂಡೆಗಳ ತಂದು
ಅಸಹಾಯಕ ಹೆಣ್ಣುಗಳ
ಕಣ್ಣೀರ ಮುತ್ತುಗಳ ತಂದು
ಬಡವ ಸವೆಸಿದ
ಮೂಳೆಗಳ ತಂದು
ನಾ ಕಟ್ಟಿದ ಕವಿತೆ
ಉಳ್ಳವರ ಕತ್ತಿಗೆ
ಉರುಳಾಗಬೇಕು
ಕಾಳಧನಿಕರ ಕಾಲಿಗೆ
ಸರಪಳಿಯಾಗಬೇಕು
ದರ್ಪತೋರ್ವನಿಗೆ
ದಂಡಿಸಲೆಬೇಕು
ನೊಂದವರಲ್ಲಿ
ನಿಟ್ಟುಸಿರ ತರಬೇಕು
ಹೆಂಗೆಳೆಯರಲ್ಲಿ
ಮಂದಹಾಸ ಬಿರಿಸಬೇಕು
ಕಾಲಾದ ನನ್ನವರಿಗೆ
ಚಿರಶಾಂತಿ ಕೊಡಿಸಲುಬೇಕು
--ಕವಿತಾ ಗೇೂಪಿಕುಂಟೆ
No comments:
Post a Comment
Note: Only a member of this blog may post a comment.