Monday, December 12, 2016

ತಿಥಿ ನಾಟಕ

ಜೀವನದಿಗಾಗಿ
ಕ್ಯಾತೆತೆಗೆದು
ಜೀವಜಲವ
ಕಸಿದುಕೊಂಡರು

ರಕ್ತಸುರಿಸಿ
ಹೋರಾಡಿದೆವು
ಗುಂಡೇಟಿಗೆ
ಪ್ರಾಣತೆತ್ತೆವು

ನರಳಾಟ ಕಂಡು
ಆರ್ತನಾದ ಕೇಳಿ
ಮನ ಕರಗದೇ
ನಿಂತರವರು

ವರುಣನೆ ಕರಗಿ
ಸಾಕೆನುವಷ್ಟು ಹರಸಿ
ದೋಣಿ ಭಾಗ್ಯ
ತಂದನು

ಮಡಿದವನ ಕೂಗು
ಮನೆಯವರ ಶಾಪ
ದೇವರ ತಲುಪಿ
ತಿಥಿಯ ನಾಟಕ
ನಿಜವಾಗಿಸಿದನು

                      --ಕವಿತಾ ಗೇೂಪಿಕುಂಟೆ

No comments:

Post a Comment

Note: Only a member of this blog may post a comment.