Sunday, October 16, 2016
Thursday, October 13, 2016
ತುತ್ತು ಅನ್ನಕ್ಕಾಗಿ
ತಾಯಗರ್ಭದ ಭ್ರೂಣದಿ
ಬೆನ್ನಿಗಂಟುವ ಹಸಿವು
ಉಸಿರು ನಿಂತು ಚಿತೆ
ಏರಿದಾಗಲೇ ಬಿಡುವುದು
ನಮ್ಮಗಳ ಹೋರಾಟ
ದೈನಂದಿನ ಪರದಾಟ
ವಿಲ ವಿಲ ಒದ್ದಾಟ
ತುತ್ತು ಅನ್ನಕ್ಕಾಗಿಯೇ
ವಿಧಿಯಗಾಳಕೆ ಸಿಕ್ಕಿ
ಬಡತನವೆ ಹಾಸಿಗೆ
ಹಸಿವೇ ಹೊದಿಕೆಯಾದಾಗ
ಕಾಡುವುದು ಅನ್ನದ ಕನಸು
ಸ್ಥಾನಮಾನ ಕಾಣದು
ಹಸಿದ ಕಣ್ಣಿಗೆ
ಮನದ ಮಾತು ಕೇಳದು
ಹಸಿದೊಟ್ಟೆಯ ಕೂಗಿಗೆ
ವಿದ್ಯೆ ವಿನಯಗಳ ಮರೆಸಿ
ಮಾನ ಮರ್ಯಾದೆಗಳ ಥಳಿಸಿ
ಕ್ರೌರ್ಯವನು ಮೆರೆಸುವುದು
ಹಸಿವ ನೀಗಿಸುವ
ತುತ್ತು ಅನ್ನಕ್ಕಾಗಿಯೇ
--ಕವಿತಾ ಗೋಪಿಕುಂಟೆ
ಬೆನ್ನಿಗಂಟುವ ಹಸಿವು
ಉಸಿರು ನಿಂತು ಚಿತೆ
ಏರಿದಾಗಲೇ ಬಿಡುವುದು
ನಮ್ಮಗಳ ಹೋರಾಟ
ದೈನಂದಿನ ಪರದಾಟ
ವಿಲ ವಿಲ ಒದ್ದಾಟ
ತುತ್ತು ಅನ್ನಕ್ಕಾಗಿಯೇ
ವಿಧಿಯಗಾಳಕೆ ಸಿಕ್ಕಿ
ಬಡತನವೆ ಹಾಸಿಗೆ
ಹಸಿವೇ ಹೊದಿಕೆಯಾದಾಗ
ಕಾಡುವುದು ಅನ್ನದ ಕನಸು
ಸ್ಥಾನಮಾನ ಕಾಣದು
ಹಸಿದ ಕಣ್ಣಿಗೆ
ಮನದ ಮಾತು ಕೇಳದು
ಹಸಿದೊಟ್ಟೆಯ ಕೂಗಿಗೆ
ವಿದ್ಯೆ ವಿನಯಗಳ ಮರೆಸಿ
ಮಾನ ಮರ್ಯಾದೆಗಳ ಥಳಿಸಿ
ಕ್ರೌರ್ಯವನು ಮೆರೆಸುವುದು
ಹಸಿವ ನೀಗಿಸುವ
ತುತ್ತು ಅನ್ನಕ್ಕಾಗಿಯೇ
--ಕವಿತಾ ಗೋಪಿಕುಂಟೆ
Sunday, October 2, 2016
ಕೂಲಿಗಾಗಿ ಕಾಳು
ಬಡವರು ಹೊಟ್ಟೆವರಿಯುವ
ಸಲುವಾಗಿ ಸರ್ಕಾರ
ತಂದಿದೆಯೊಂದು ಯೋಜನೆ
ಅದುವೇ
ಕೂಲಿಗಾಗಿ ಕಾಳು ಯೋಜನೆ
ಬಹುಪಾಲು ಹಳ್ಳಿಗಳಿಗೆ
ಇದರ ಗಂಧವೇ ಸೋಕಿಲ್ಲ
ತಿರುಗಾಡುತಿಹುದು
ಅಧಿಕಾರಿ ಬಳಗದಲ್ಲೆಲ್ಲ
ಉಸ್ತುವಾರಿಯನ್ನು
ಗುತ್ತಿಗೆದಾರ ಪಡೆವ
ಕೆಲಸಕ್ಕಾಗಿ
ಯಂತ್ರಗಳ ತರುವ
ಅಧ್ಯಯನ ತಂಡ
ಇಣುಕುವಾಗ
ನೆಪಮಾತ್ರಕೆ
ಕೂಲಿಯಾಳುಗಳ
ಕರೆತರುವ
ಕೂಲಿಗಾಗಿ ಕಾಳು
ಯೋಜನೆಯಲ್ಲವಿದು
ಅಧಿಕಾರಿಗಾಗಿ
ಕಾಳು ಯೋಜನೆ
--ಕವಿತಾ ಗೋಪಿಕುಂಟೆ
Subscribe to:
Posts (Atom)