Friday, September 23, 2016

ಕಣ್ಣೀರಧಾರೆ



ಈ ಸೃಷ್ಟಿಯೇ ಕಣ್ಣು
ಕಣ್ಣಗುಡ್ಡೆಯೇ ನೆಲ
ರಸಧಾತುವೇ ಜಲ
ನರನಾಡಿಗಳೇ ಮರಗಿಡ
ರೆಪ್ಪೆಗಳೇ ಓಜೋನ್ 

ಸೃಷ್ಟಿ ಸಲಹಲೆಂದೇ
ಹಣೆಯ ಮೇಲಿರಿಸಿಕೊಂಡಿಹನು
ಮುಕ್ಕಣ್ಣನು ಮೂರನೇ ಕಣ್ಣನು
ಸೃಷ್ಟಿ ಶಾಂತಿಯಿಂದಿರಲು
ಅವ ಶಾಂತಿಯಿಂದಿರುವನು 

ಉಪಟಳವು ಅತಿಯಾಗಿ
ಬಿಸಿಯೇರಿ ಹೊಗೆಯಾಡಿ
ಮಲಿನ ಆವರಿಸಿ
ಧೂಳು ಬಡಿದಾಗ
ತೆರೆವನು ಮುಕ್ಕಣ್ಣನು
ಮೂರನೆಯ ಕಣ್ಣನು 

ತರುವನು ವಿಕಿರಣವನು  
ಅಳಿವಿನಂಚಿನ ಸುಳಿವನು
ಸುನಾಮಿಯಂತ ಕಣ್ಣೀರರಿಸಿ
ನರನಾಡಿಗಳ ನರಳಾಡಿಸಿ
ತಂದೊಡ್ಡುವನು ವಿನಾಶವನು 


                                     
 --ಕವಿತಾ ಗೋಪಿಕುಂಟೆ 

No comments:

Post a Comment

Note: Only a member of this blog may post a comment.