Saturday, September 17, 2016

ಮಣ್ಣಿನ ಸೆಳೆತ

ಏನೇನೋ ಓದಿ ಎಷ್ಟೆಲ್ಲಾ ಡಿಗ್ರಿ ತಗೊಂಡು ವಿಶ್ವ ಸುತ್ತಿ ಬಂದ್ರು ಒಂದು ನೆಲೆ ಅಂತ ತೋರಿಸೋದು ನಮ್ಮ ತವರು ನೆಲ. ಆ ತವರು ನೆಲದ ಸೆಳೆತಕ್ಕೆ ಸಿಕ್ಕಿ ಕಂಪ್ಯೂಟರ್ ಬಿಟ್ಟು ಮೇಟಿ ಹಿಡಿದ ಮಂಡ್ಯದ ಮಧುಚಂದನ್ ಸರ್ ಅವರ ಯಶೋಗಾಥೆ ನಮ್ಮಂತ ಸಾವಿರಾರು ಮಂದಿಗೆ ಸ್ಪೂರ್ತಿ ಸೆಲೆ. ಮಧುಚಂದನ್ ಸರ್ ರವರನ್ನ ಮಣ್ಣು ಸೆಳೆದ ರೀತಿ , ಅವತ್ತಿನ ಅವರ ಆಲೋಚನೆ ಮತ್ತು ಅವರ  ಶ್ರಮವನ್ನ ಊಹಿಸಿಕೊಂಡು  ಕವಿತೆಯೊಂದನ್ನ  ಬರೆದಿದ್ದೇನೆ. ದಯವಿಟ್ಟು ಓದಿ ಪ್ರತಿಕ್ರಯಿಸಿ  


ಮೂಗಿಗೆ ಮಳೆಯಲಿ ಮಿಂದೆದ್ದ
ಮಣ್ಣವಾಸನೆಯ  ಸೆಳೆತ
ಹದವಾದ ಮನಸಿಗೆ
ತವರ ಮಣ್ಣಿನ ಸೆಳೆತ

ಸೆಳೆತ ಹೆಚ್ಚಾಗಿ
ಮೆದುಳೆಲ್ಲಾ ಮಣ್ಣಾಗಿ
ಎರೆಹುಳಗಳ ಸಲಹೆ
ರಭಸ ತೀವ್ರವಾಗಿ

ಆಲೋಚನೆಗಳೆಲ್ಲ ಕಳಿತು
ಕಣಕಣದಲ್ಲೂ ಕುಳಿತು
ರಸವಾಗಿ ಹೊರಹೊಮ್ಮಿ
ತಂದಿರುವುದೊಳ್ಳೆ ಫಸಲು

                                 --ಕವಿತಾ ಗೋಪಿಕುಂಟೆ  

No comments:

Post a Comment

Note: Only a member of this blog may post a comment.